ದಾವಣಗೆರೆ: ‘ಜನತಾವಾಣಿ’ ಪತ್ರಿಕೆಯ ವರದಿಗಾರರು ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಯ ಪತ್ರಕರ್ತ ಶ್ರೀ ಸಿದ್ದಯ್ಯ ಒಡೆಯರ್ ಅವರು ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ದಿನಾಂಕ 26.08.2026 (ಬುಧವಾರ) ರಂದು ನಸುಕಿನ 2:15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸುದ್ದಿಯನ್ನು ಸಿದ್ದಯ್ಯ ಒಡೆಯರ್ ಅವರ ಅಳಿಯ ಚೇತನ್ ಬಸವರಾಜು ಅವರು ಖಚಿತಪಡಿಸಿದ್ದಾರೆ.
ಸಿದ್ದಯ್ಯ ಒಡೆಯರ್ ಅವರು ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ರಾಜ್ಯ ಯುವ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ನಿಧನಕ್ಕೆ ಪತ್ರಕರ್ತರು, ಗಣ್ಯರು ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ. ಕೆಯುಡಬ್ಲ್ಯೂಜೆ (KUWJ) ದಾವಣಗೆರೆ ಜಿಲ್ಲಾ ಘಟಕದ ಸದಸ್ಯರು ತೀವ್ರ ಸಂತಾಪ ಸೂಚಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಿದ್ದಯ್ಯ ಒಡೆಯರ್ ಅವರ ಒಡನಾಟವನ್ನು ನೆನಪಿಸಿಕೊಂಡಿರುವ ಹಲವು ಪತ್ರಕರ್ತರು “ಒಡೆಯರ್ ಅಪಾರ ಪ್ರೀತಿಯ ಮನುಷ್ಯರಾಗಿದ್ದರು. ಅವರ ಅಗಲಿಕೆ ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ” ಎಂದು ಕಂಬನಿ ಮಿಡಿದಿದ್ದಾರೆ.
ಹಲವಾರು ಪತ್ರಕರ್ತ ಮಿತ್ರರು ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿ ‘ಓಂ ಶಾಂತಿ’ ಕೋರಿದ್ದಾರೆ.
Leave a comment